ರಂಗನಾಥನೆ ನಿಮ್ಮ ಕಾಣದೆ
ಭಂಗ ಪಟ್ಟೆನು ಬಹುದಿನಾ…||ರಂಗ||
ಮಂಗಳಾಂಗ ನಿಮ್ಮ ಪಾದವ
ಎನ್ನ ಕಂಗಳಿಗೇ ತೋರೋ…||ಮಂಗಳಾಂಗ||
||ರಂಗನಾಥನೆ||
ಭಂಗ ಪಟ್ಟೆನು ಬಹುದಿನಾ …
ಕರಿಯ ಮೊರೆ ಲಾಲಿಸಿದಿ ಬೇಗನೆ
ನೆರೆದ ಸಭೆಯಲಿ ದ್ರೌಪದಿಗೆ
ಅಭಯವನಿತ್ತೇ ||ಕರಿಯ||
ಅಡವಿಯಲಿ ಅಹಲ್ಯೆಯ ಸಲಹಿದಿ
ಮುಚುಕುಂದನ ರಕ್ಷಿಸಿದೀ||ಅಡವಿ||
ಮುಚುಕುಂದನ ರಕ್ಷಿಸಿದೀ….
||ರಂಗನಾಥನೆ||
ಭಂಗ ಪಟ್ಟೆನು ಬಹುದಿನ. ….
ಪುಟ್ಟ ಪ್ರಹ್ಲಾದನ ಸಲಹಿದಿ
ಪಟ್ಟವನು ವಿಭೀಷಣನಿಗೆ ಸಲ್ಲಿಸಿದಿ
||ಪುಟ್ಟ||
ದಟ್ಟ ಅಡವಿಲಿ ಬಂದ ಧ್ರುವನ
ಆದರಿಸಿ ಕಾಯ್ದ ರಂಗನಾಥ||ದಟ್ಟ||
ಆದರಿಸಿ ಕಾಯ್ದ ರಂಗನಾಥ….
||ರಂಗನಾಥನೆ||
ಭಂಗ ಪಟ್ಟೆನು ಬಹುದಿನ. …
ಎಷ್ಟು ಹೇಳಲಿ ನಿಮ್ಮ ಮಹಿಮೆಯ
ಸ್ರಿಷ್ಠಿ ಸ್ಥಿತಿ ಲಯವನ್ನು ಅಳೆದೆ, ರಂಗನಾಥಾ
||ಎಷ್ಟು||
ಈ ಪುಟ್ಟ ಪಾದವ ಎನ್ನ ಮನದಲಿ
ಇಟ್ಟು ದಯಮಾಡೊ ಕ್ರಷ್ಣಾ. …||ಈ ಪುಟ್ಟ||
ಇಟ್ಟು ದಯಮಾಡೊ ಕ್ರಷ್ಣಾ. ….
||ರಂಗನಾಥನೆ||
ಭಂಗ ಪಟ್ಟೆನು ಬಹುದಿನ. …
ದಕ್ಷಿಣ ಮುಖವಾಗಿ ಪವಡಿಸಿದಿ ನೀ
ದೇವಶಿಖಾಮಣೀ ಏಳೈ…
ದೇವಶಿಖಾಮಣೀ ಏಳೈ….||ದಕ್ಷಿಣ||
ಬಂದ ಭಕ್ತರಿಗೆಲ್ಲಾ
ಅಭಯ ಹಸ್ತವ ಕೊಡುವಿ
ರಾಜೀವನೇತ್ರ ಹಯವದನ||ಅಭಯ||
ರಾಜೀವನೇತ್ರ ಹಯವದನಾ….
||ರಂಗನಾಥನೆ||