ಅದ್ಭುತ ಗಣೇಶ ಮಂತ್ರಗಳಿವು..!
ಗಣೇಶನನ್ನು ಕಲೆ ಮತ್ತು ವಿಜ್ಞಾನದ ಪೋಷಕ ಎಂದು ಪರಿಗಣಿಸಲಾಗುತ್ತದೆ. ಗಣೇಶನು ಬುದ್ಧಿವಂತಿಕೆ ಮತ್ತು ಜ್ಞಾನದ ದೇವರು.ಗಣಪತಿಯು ಬುದ್ಧಿ,ಸಿದ್ಧಿ ಮತ್ತು ಋದ್ಧಿ ಎಂದು ಹೆಸರಿಸಲಾದ ಮೂರು ಗುಣಗಳ ಮೂರ್ತರೂಪ. ಗಣೇಶನು ಮಂತ್ರಗಳಿಂದ ಸುಲಭವಾಗಿ ಪ್ರಸನ್ನನಾಗುತ್ತಾನೆ.
ಹಿಂದೂ ಧರ್ಮದ ಪ್ರಕಾರ, ಗಣೇಶನು ಜ್ಞಾನ,ಬುದ್ಧಿವಂತಿಕೆ ಮತ್ತು ಸಮೃದ್ಧಿಯ ದೇವರು. ಅವನನ್ನು ಎಲ್ಲಾ ದೇವರುಗಳ ಮುಖ್ಯಸ್ಥ ಎಂದು ಪರಿಗಣಿಸಲಾಗುತ್ತದೆ ಮತ್ತು ಮೊದಲ ಪೂಜಿಪನೆಂದು ಪರಿಗಣಿಸಲಾಗುತ್ತದೆ. ಭಗವಾನ್ ಗಣೇಶನು ಶಿವ ಮತ್ತು ಪಾರ್ವತಿ ದೇವಿಯ ಪುತ್ರರಲ್ಲಿ ಒಬ್ಬನು.ಅವನು ಕಾರ್ತಿಕೇಯನ ಸಹೋದರ. ಗಣೇಶನನ್ನು ಗಣಪತಿ ಮತ್ತು ವಿನಾಯಕ ಎಂದು ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ.ಹಿಂದೂ ಧರ್ಮದಲ್ಲಿ ಹೆಚ್ಚು ಪೂಜಿಸುವ ದೇವರುಗಳಲ್ಲಿ ಒಬ್ಬನು. ಗಣೇಶನ ಆರಾಧನೆಯು ನಮ್ಮ ಜೀವನದಿಂದ ಎಲ್ಲಾ ಅಡೆತಡೆಗಳು ಮತ್ತು ತೊಂದರೆಗಳನ್ನು ನಿವಾರಿಸುತ್ತದೆ. ಗಣೇಶನ ಮಂತ್ರಗಳನ್ನು ಪಠಿಸುವುದು ನಮಗೆ ಶೀಘ್ರ ಅವನ ಆಶೀರ್ವಾದವನ್ನು ಕರುಣಿಸುತ್ತದೆ.
“ಶಕ್ತಿವಿನಾಯಕ ಮಂತ್ರ”
“ಓಂ ಹ್ರೀಂಗ್ ಗ್ರೀಂಗ್ ಹ್ರೀಂಗ್”ಆರ್ಥಿಕ ಯಶಸ್ಸು ಮತ್ತು ಸಮೃದ್ಧಿಯನ್ನು ಪಡೆಯಲು ಈ ಮಂತ್ರವನ್ನು ಜಪಿಸಲಾಗುತ್ತದೆ. ಇದು ಉತ್ತಮ ಆರೋಗ್ಯ ಮತ್ತು ಅದೃಷ್ಟಕ್ಕಾಗಿ ಪ್ರಬಲವಾದ ಗಣೇಶ ಮಂತ್ರ ಎಂಬುದು ಗಣಪನ ಭಕ್ತರ ನಂಬುಗೆ.
“ಗಣೇಶ ಮಂತ್ರ”
“ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ
ನಿರ್ವಿಘ್ನಂ ಕುರು ಮೇ ದೇವ ಸರ್ವಕಾರ್ಯೇಷು ಸರ್ವದಾ”
ಜೀವನದಿಂದ ಎಲ್ಲಾ ಅಡೆತಡೆಗಳನ್ನು ನಿವಾರಿಸಲು ಈ ಮಂತ್ರದ ಮೂಲಕ ಗಣೇಶನನ್ನು ಪ್ರಾರ್ಥಿಸುವುದಾಗಿದೆ. ಇದು ಎಲ್ಲಾ ಪ್ರಯತ್ನಗಳಲ್ಲಿ ಅದೃಷ್ಟ, ಸಮೃದ್ಧಿ,ಸಂಪತ್ತು,ಯಶಸ್ಸು ಮತ್ತು ಬುದ್ಧಿವಂತಿಕೆಯನ್ನು ತರುತ್ತದೆ ಎನ್ನಲಾಗುತ್ತದೆ.
“ಸಿದ್ಧಿ ವಿನಾಯಕ ಮಂತ್ರ”
"ಓಂ ನಮೋ ಸಿದ್ಧಿ ವಿನಾಯಕಾಯ
ಸರ್ವ ಕಾರ್ಯ ಕರ್ತ್ರೇ ಸರ್ವ ವಿಘ್ನ ಪ್ರಶಮ್ನಾಯ
ಸರ್ವರ್ಜಯ ವಶ್ಯಕರ್ಣಾಯ ಸರ್ವಜನ ಸರ್ವಸ್ತ್ರೀ ಪುರುಷ ಆಕರ್ಷಣಾಯ ಶ್ರೀಂಗ್ ಓಂ ಸ್ವಾಹಾ.”
ಭೌತಿಕ ಆಸೆಗಳ ನೆರವೇರಿಕೆ ಮತ್ತು ಆಧ್ಯಾತ್ಮಿಕ ಜ್ಞಾನೋದಯದೊಂದಿಗೆ ಶಾಂತಿ,ಸಮೃದ್ಧಿ ಮತ್ತು ಬಲವಾದ ಸಾಮಾಜಿಕ ಪ್ರಭಾವವನ್ನು ಸಾಧಿಸಲು ಈ ಮಂತ್ರವನ್ನು ಬಳಸಲಾಗುತ್ತದೆ.
“ಗಣೇಶ ಮೂಲ ಮಂತ್ರ”
“ಓಂ ಶ್ರೀಂ ಹ್ರೀಂ ಕ್ಲೀಂ ಗ್ಲೌಂ ಗಂ ಗಣಪತಯೇ ವರ ವರದ ಸರ್ವಜನ ಜನ್ಮಯಾ ವಶಮಾನಾಯೇ ಸ್ವಾಹಾ
ತತ್ಪುರುಷಾಯಾ ವಿದ್ಮಹೇ
ವಕ್ರತುಂಡಾಯ ಧೀಮಹಿ
ತನ್ನೋ ದಂತಿ ಪ್ರಚೋದಯಾತ್
ಓಂ ಶಾಂತಿಃ ಶಾಂತಿಃ ಶಾಂತಿಃ”
ಗಣೇಶ ಈ ಮೂಲ ಮಂತ್ರವನ್ನು ಎಲ್ಲಾ ಗಣೇಶ ಮಂತ್ರಗಳಲ್ಲಿ ಅತ್ಯಂತ ಶಕ್ತಿಶಾಲಿ ಎಂದು ಪರಿಗಣಿಸಲಾಗಿದೆ.ಇದು ಒಬ್ಬರ ಜೀವನದಲ್ಲಿ ಶುದ್ಧತೆ, ಸಕಾರಾತ್ಮಕತೆ, ಶಕ್ತಿಯನ್ನು ಆಹ್ವಾನಿಸುತ್ತದೆ.ಹಿಂದೂ ಧಾರ್ಮಿಕ ಸಮಾರಂಭಗಳಲ್ಲಿ ಇದನ್ನು ವ್ಯಾಪಕವಾಗಿ ಪಠಿಸಲಾಗುತ್ತದೆ.ಮಂತ್ರವು ಯಶಸ್ಸು,ಅದೃಷ್ಟ, ಶಾಂತಿಯನ್ನು ತರುತ್ತದೆ ಮತ್ತು ಜೀವನದಿಂದ ಎಲ್ಲಾ ಅಡೆತಡೆಗಳನ್ನು ತೆಗೆದುಹಾಕುತ್ತದೆ ಎನ್ನಲಾಗಿದೆ.
“ಗಣಪತಿ ಬೀಜ ಮಂತ್ರ”
“ಓಂ ಗಂ ಗಣಪತಯೇ ನಮಃ”
ಈ ಗಣೇಶ ಮಂತ್ರವು ಗಣಪತಿ ಉಪನಿಷತ್ನಿಂದ ಆಯ್ದುಕೊಂಡ ಮಂತ್ರವಾಗಿದೆ. ಯಾವುದೇ ಹೊಸ ಉದ್ಯಮವನ್ನು ಪ್ರಾರಂಭಿಸುವ ಮೊದಲು ಈ ಮಂತ್ರವನ್ನು ಪಠಿಸಲಾಗುತ್ತದೆ.ಯೋಗ ಸಾಧನೆಗೂ ಇದು ಸೂಕ್ತವಾದ ಮಂತ್ರವಾಗಿದೆ.ಈ ಮಂತ್ರದಲ್ಲಿ ಗಂ ಎನ್ನುವ ಶಬ್ಧವನ್ನು ಬಳಸಲಾಗಿದೆ.ಇದು ಗಣೇಶನ ಬೀಜ ಮಂತ್ರವಾಗಿದೆ.ಈ ಮಂತ್ರದ ಪಠಣವು ನಮ್ಮ ಮನಸ್ಸನ್ನು ಶಾಂತವಾಗಿ ಮತ್ತು ಏಕಾಗ್ರವಾಗಿರಿಸಲು ಸಹಾಯ ಮಾಡುತ್ತದೆ.ಇದು ನಮ್ಮ ಏಕಾಗ್ರತೆ ಶಕ್ತಿಯನ್ನೂ ವೃದ್ಧಿಸುತ್ತದೆ.
“ಋಣ ಹರ್ತ ಗಣೇಶ ಮಂತ್ರ”
“ಓಂ ಗಣೇಶ ಋಣಂ ಛಿಂಧಿ ವರೇಣ್ಯಂ ಹೂಂಗ್ ನಮಃ ಫಟ್”.
ಸಾಲ ಮತ್ತು ಬಡತನವನ್ನು ದೂರವಿರಿಸಿ ಜೀವನದಲ್ಲಿ ಸಮೃದ್ಧಿ ಮತ್ತು ಸಾರ್ಥಕತೆಯನ್ನು ತರಲು ಈ ಮಂತ್ರದ ಮೂಲಕ ಗಣೇಶನನ್ನು ಬೇಡಿಕೊಳ್ಳುವುದಾಗಿದೆ.ಇದು ಜೀವನದಲ್ಲಿ ಸಂಪತ್ತು ಮತ್ತು ಸಮೃದ್ಧಿಯನ್ನು ತರುವ ಮಂತ್ರವಾಗಿದೆ.
“ಗಣೇಶ ಚತುರ್ಥಿ ಮಂತ್ರ”
“ಓಂ ಶ್ರೀಂಗ್ ಹ್ರೀಂಗ್ ಕ್ಲೀಂಗ್ ಗ್ಲೌಂಗ್ ಗಂಗ್
ಗಣಪತಯೇ ವರ ವರದ ಸರ್ವಜನ್ಮಾಯ ವಶಮನಾಯ ಥಾ ಥಾ”
ಈ ಮಂತ್ರವನ್ನು ಗಣೇಶ ಚತುರ್ಥಿಯಂದು ವಿಶೇಷವಾಗಿ ಪಠಿಸಲಾಗುತ್ತದೆ.ಇದು ಆಶೀರ್ವಾದ,ಸಮೃದ್ಧಿ ಮತ್ತು ಯಶಸ್ಸನ್ನು ನೀಡೆಂದು ಗಣೇಶನನ್ನು ಬೇಡಿಕೊಳ್ಳುವುದಾಗಿದೆ.ಈ ಮಂತ್ರದ ನಿಯಮಿತವಾದ ಪಠಣವು ಒಬ್ಬರ ಜೀವನದಲ್ಲಿ ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತದೆ.
“ಅಡೆತಡೆಗಳನ್ನು ತೆಗೆದುಹಾಕಲು ಶಕ್ತಿಯುತ ಗಣೇಶ ಮಂತ್ರ”
“ಓಂ ಗಜಾನನಂ ಭೂತಗಣಾಧಿಸೇವಿತಂ
ಕಪಿತ್ಥ ಜಂಬೂ ಫಲಚಾರು ಭಕ್ಷಣಾಂ
ಉಮಾಸುತಂ ಶೋಕವಿನಾಶಕಾರಕಂ ನಮಾಮಿ ವಿಘ್ನೇಶ್ವರ ಪದಪಂಕಜಂ ಓಂ”
ಈ ಮಂತ್ರವನ್ನು ಓರ್ವ ವ್ಯಕ್ತಿಯ ಜೀವನದ ಅಡೆತಡೆಗಳನ್ನು ತೆಗೆದುಹಾಕಲು ಬಳಸಲಾಗುತ್ತದೆ.ಇದು ನಮ್ಮ ಜೀವನದಲ್ಲಿ ಯಶಸ್ಸು, ಸಮೃದ್ಧಿ ಮತ್ತು ಒಟ್ಟಾರೆ ಯೋಗಕ್ಷೇಮವನ್ನು ನೀಡುತ್ತದೆ.
“ಆರೋಗ್ಯ ಮತ್ತು ಸಂತೋಷಕ್ಕಾಗಿ ಶಕ್ತಿಯುತ ಗಣೇಶ ಮಂತ್ರ”
“ಓಂ ಶ್ರೀಂ ಗಂ ಸೌಭಾಗ್ಯ ಗಣಪತಯೇ ವರವರದ
ಸರ್ವಜನಂ ಮೇ ವಶಮಾನಾಯ ನಮಃ”.
ಇದು ಗಣೇಶನ ಸೌಭಾಗ್ಯ ಮಂತ್ರವಾಗಿದ್ದು,ಈ ಮಂತ್ರದ ಮೂಲಕ ನಾವು ಪ್ರಸ್ತುತ ಮತ್ತು ಉತ್ತಮ ಭವಿಷ್ಯಕ್ಕಾಗಿ ಅದೃಷ್ಟವನ್ನು ನೀಡುವಂತೆ ನಾವು ಗಣೇಶನನ್ನು ಪ್ರಾರ್ಥಿಸುತ್ತೇವೆ.ಈ ಮಂತ್ರವನ್ನು ಪಠಿಸುವುದರಿಂದ ಓರ್ವ ವ್ಯಕ್ತಿಯು ಉತ್ತಮ ಆರೋಗ್ಯ,ಸಂತೋಷ ಮತ್ತು ಶಾಂತಿಯನ್ನು ಪಡೆದುಕೊಳ್ಳುತ್ತಾನೆ ಎನ್ನುವ ನಂಬಿಕೆಯಿದೆ.
“ಶಕ್ತಿಯುತ ಗಣೇಶ ಮಂತ್ರ’
”ಓಂ ಏಕದಂತಾಯ ನಮಃ”
ಇದು ಅತ್ಯಂತ ಶಕ್ತಿಯುತವಾದ ಆದರೆ ಸರಳವಾದ ಗಣೇಶ ಮಂತ್ರವಾಗಿದೆ. ಇಲ್ಲಿ, ಗಣೇಶನನ್ನು "ಏಕದಂತ" ಎಂದು ಉಲ್ಲೇಖಿಸಲಾಗಿದೆ. ಅಂದರೆ, ಆನೆಯ ಮುಖವನ್ನು ಹೊಂದಿರುವ,ಒಂದು ದಂತವನ್ನು ಹೊಂದಿರುವ ದೇವನಾಗಿದ್ದಾನೆ.ಈ ಮಂತ್ರವು ಉತ್ತಮ ಆಲೋಚನೆಯನ್ನು ನಮ್ಮಲ್ಲಿ ಸೃಷ್ಟಿಸುತ್ತದೆ.ಈ ಮಂತ್ರವು ಓರ್ವ ವ್ಯಕ್ತಿಯ ಮನಸ್ಸಿನಲ್ಲಿ ಏಕತೆಯ ಭಾವನೆಯನ್ನು ತುಂಬುತ್ತದೆ.
“ಅಡೆತಡೆಗಳನ್ನು ನಿವಾರಿಸಲು ಗಣೇಶ ಮಂತ್ರ”
”ಓಂ ವಿಘ್ನನಾಶನಾಯ ನಮಃ”
ಇದು ಅಡೆತಡೆಗಳನ್ನು ನಿವಾರಿಸಲು ಸರಳವಾದ ಆದರೆ ಶಕ್ತಿಯುತವಾದ ಗಣೇಶ ಮಂತ್ರವಾಗಿದೆ.ಗಣೇಶನನ್ನು ಅಡೆತಡೆಗಳನ್ನು ನಿವಾರಿಸುವವನು ಎಂದು ಪರಿಗಣಿಸಲಾಗಿದೆ.ನಮ್ಮ ಜೀವನದಿಂದ ಎಲ್ಲಾ ರೀತಿಯ ಅಡೆತಡೆಗಳನ್ನು ತೆಗೆದುಹಾಕುವ ಶಕ್ತಿ ಗಣೇಶನಿಗಿದೆ.ಈ ಮಂತ್ರವನ್ನು ಪಠಿಸುವುದರಿಂದ ಭೌತಿಕ ನಿರ್ಬಂಧಗಳಿಂದ ಮುಕ್ತಿ ದೊರೆಯುತ್ತದೆ.
“ಸಹಾಯ ಮನೋಭಾವವನ್ನು ಬೆಳೆಸುವ ಮಂತ್ರ”
”ಓಂ ಗಣಾಧ್ಯಕ್ಷಾಯ ನಮಃ”
ಈ ಮಂತ್ರದಲ್ಲಿ ಗಣೇಶನನ್ನು ಗಣಗಳ ನಾಯಕ ಎಂದು ಕರೆಯಲಾಗುತ್ತದೆ. ಈ ಮಂತ್ರವನ್ನು ಪಠಿಸುವುದರಿಂದ ಅದು ನಿಮ್ಮ ಮನಸ್ಸಿನಲ್ಲಿ ಇತರರಿಗೆ ಸಹಾಯ ಮಾಡುವ ಗುಣವನ್ನು ಬೆಳೆಸುತ್ತದೆ.
“ಗಣೇಶ ಗಾಯತ್ರಿ ಮಂತ್ರ”
“ಓಂ ಏಕದಂತಾಯ ವಿದ್ಮಾಹೇ
ವಕ್ರತುಂಡಯಾ ಧೀಮಹೀ
ತನ್ನೋ ದಂತಿ ಪ್ರಚೋದಯಾತ್”
ಅಪಾರ ಬುದ್ಧಿಶಕ್ತಿಯನ್ನು ಮತ್ತು ಜ್ಞಾನವನ್ನು ಪಡೆದುಕೊಳ್ಳುವುದಕ್ಕಾಗಿ ನಾವು ಈ ಗಣೇಶ ಗಾಯತ್ರಿ ಮಂತ್ರವನ್ನು ಪಠಿಸುವುದು ಉತ್ತಮ.ಗಣೇಶ ಗಾಯತ್ರಿ ಮಂತ್ರವು ನಮ್ಮಲ್ಲಿ ನಮ್ರತೆ,ಸದಾಚಾರ ಮತ್ತು ಉನ್ನತ ಮಟ್ಟದ ಬುದ್ಧಿವಂತಿಕೆಯನ್ನು ಬೆಳೆಸುತ್ತದೆ.
“ಶಕ್ತಿಯುತ ಗಣೇಶ ಮಂತ್ರಗಳುವು”
“ಓಂ ಶ್ರೀ ಗಣೇಶಾಯ ನಮಃ”
“ಓಂ ವಕ್ರತುಂಡಾಯ ನಮಃ”
“ಓಂ ಕ್ಷಿಪ್ರ ಪ್ರಸಾದಾಯ ನಮಃ”
“ಓಂ ಸುಮುಖಾಯ ನಮಃ”
“ಓಂ ಕಪಿಲಾಯ ನಮಃ”
“ಓಂ ಗಜಕರ್ಣಿಕಾಯ ನಮಃ”
“ಓಂ
ಸರ್ವೇ ಜನಾ ಸುಖಿನೋ ಭವಂತು